ಪುಷ್ಪ-2 ರಿಲೀಸ್ ಮಾಡದ ಥಿಯೇಟರ್ ಓನರ್ಗೆ ಕೊ*ಲೆ ಬೆದರಿಕೆ
![ಪುಷ್ಪ-2 ರಿಲೀಸ್ ಮಾಡದ ಥಿಯೇಟರ್ ಓನರ್ಗೆ ಕೊ*ಲೆ ಬೆದರಿಕೆ](https://cinibeat.com/wp-content/uploads/2024/12/2bcb50970b611f773bb571b62da1cca2-850x560.png)
ಗುರುವಾರ, ಡಿಸೆಂಬರ್ 5 ರಂದು ತೆಲಂಗಾಣದ ಥಿಯೇಟರ್ನಲ್ಲಿ ವ್ಯಕ್ತಿಯೊಬ್ಬ ಮತ್ತು ಅವನ ಸ್ನೇಹಿತರು, ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಸಿನಿಮಾ ರಿಲೀಸ್ ಮಾಡದ ಥಿಯೇಟರ್ನೇ ಧ್ವಂಸಗೊಳಿಸಿದ ಆಘಾತಕಾರಿ ಘಟನೆ ನಡೆದಿದೆ. ವರದಿಯ ಪ್ರಕಾರ, ಟಿಕೆಟ್ ಮಾರಾಟವಾದ ನಂತ್ರ ತಾಂತ್ರಿಕ ದೋಷದಿಂದಾಗಿ ಅಲ್ಲು ಅರ್ಜುನ್ ಸ್ಟಾರ್ಟರ್, ಪುಷ್ಪ 2: ದಿ ರೂಲ್ ಅನ್ನು ಪ್ರದರ್ಶಿಸಲು ಮಂಚೇರಿಯಲ್ ಜಿಲ್ಲೆಯ ಚೆನ್ನೂರು ಪಟ್ಟಣದಲ್ಲಿರೋ ಶ್ರೀನಿವಾಸ್ ಥಿಯೇಟರ್ ವಿಫಲವಾದಾಗ, ಬಜ್ಜೂರಿ ವಿನಯ್ ಅನ್ನೋ ವ್ಯಕ್ತಿ ದಾಂಧಲೆ ನಡೆಸಿದ್ದಾನೆ.
ಬಜ್ಜೂರಿ ವಿನಯ್ ಮತ್ತವನ ಸಂಗಡಿಗರು ಥಿಯೇಟರ್ ಆಡಳಿತದ ವಿರುದ್ಧ ಪ್ರತಿಭಟಿಸಿ, ಥಿಯೇಟರ್ ಆವರಣಕ್ಕೆ ಅತಿಕ್ರಮಣ ಮಾಡಿ, ಥಿಯೇಟರ್ನ ಗಾಜಿನ ಕಿಟಕಿ ಗಾಜುಗಳನ್ನು ಹಾನಿಗೊಳಿಸಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ಅಭಿನಯದ ಸಿನಿಮಾವನ್ನು ಪ್ರದರ್ಶಿಸದಿದ್ದರೆ ಮಾಲೀಕ ರಾಜಮಲ್ಲಗೌಡನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸದ್ಯ ಥಿಯೇಟರ್ ಮಾಲೀಕರು ಈ ವಿನಯ್ ಹಾಗೂ ಸ್ನೇಹಿತರ ವಿರುದ್ಧ ದೂರು ನೀಡಿದ್ದು, ಪೊಲೀಸರು ಕ್ರಮ ಜರುಗಿಸಿದ್ದಾರೆ.