cinibeat

Cinibeat Kannada Sandalwood

ಗುಲ್ಟು ನವೀನ್‌ನ್ನ ಜ.31ಕ್ಕೆ ನೋಡಿದವರು ಏನಂತಾರೆ??

ʻನೋಡಿದವರು ಏನಂತಾರೆ’ ತೆರೆಗೆ ಬರಲು ರೆಡಿ…ಜ.31ಕ್ಕೆ ನವೀನ್ ಶಂಕರ್ ಸಿನಿಮಾ ರಿಲೀಸ್ ನವೀನ್ ಶಂಕರ್ ನಟನೆಯ ‘ನೋಡಿದವರು ಏನಂತಾರೆ’ ಸಿನಿಮಾ ಬಿಡುಗಡೆ ರೆಡಿ. ಜ.31ಕ್ಕೆ ನವೀನ್ ಶಂಕರ್ ನಟನೆಯ ‘ನೋಡಿದವರು ಏನಂತಾರೆ’ ಸಿನಿಮಾ ರಿಲೀಸ್ ಫಸ್ಟ್ ಲುಕ್ ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ವಿಶಿಷ್ಟ ಶೀರ್ಷಿಕೆಯುಳ್ಳ ನೋಡಿದವರು ಏನಂತಾರೆ ಚಿತ್ರ ಪ್ರೇಕ್ಷಕರಿಗೆ ಒಂದು ಹೊಸ ಅನುಭವ ನೀಡಲು ಸಿದ್ಧವಾಗಿದೆ. ಈ ಸಿನಿಮಾವನ್ನು ಕುಲದೀಪ್ ಕಾರಿಯಪ್ಪ ಅವರು ಬರೆದು ನಿರ್ದೇಶಿಸಿದ್ದು, ನಾಗೇಶ್ ಗೋಪಾಲ್ ಅವರು ನಿರ್ಮಾಣ ಮಾಡಿದ್ದಾರೆ. ‘ನೋಡಿದವರು […]Read More

Bollywood Cinibeat South Cinema

ಪುಷ್ಪ-2 ಫಸ್ಟ್‌ ಡೇ ಕಲೆಕ್ಷನ್‌ 250+ ಕೋಟಿ! ಬಾಹುಬಲಿ-2,KGF-2, RRR ದಾಖಲೆ ಉಡೀಸ್‌

ಪುಷ್ಪ ರಾಜ್​ನ ಮಾಸ್ ಜಾತ್ರೆ ಜೋರಾಗಿದೆ. ರಿಲೀಸ್ ಆದ ಮೊದಲ ದಿನವೇ ಬಾಕ್ಸ್ ಆಫೀಸ್​​ನಲ್ಲಿ​​ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿದೆ. ಪ್ರೀಮಿಯರ್ ಶೋಗಳಿಂದಲೇ ಚಿತ್ರ ಬ್ಲಾಕ್ ಬಸ್ಟರ್ ಪಡೆದುಕೊಂಡಿದೆ ಎಂಬ ಟಾಕ್ ಶುರುವಾಗಿತ್ತು. ಹೀಗಾಗಿ ಪುಷ್ಪ-2 ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಎಕ್ಸೈಟ್​ಮೆಂಟ್ ಅಭಿಮಾನಿಗಳದ್ದಾಗಿದೆ. ಮುಂಗಡ ಬುಕ್ಕಿಂಗ್ ಮೂಲಕವೇ 100 ಕೋಟಿ ಕಲೆಕ್ಷನ್ ಮಾಡಿದ್ದ ಪುಷ್ಪ 2, ಬಿಡುಗಡೆಯಾದ ಫಸ್ಟ್​ ಡೇ ಭರ್ಜರಿ ಕಲೆಕ್ಷನ್ ಮಾಡಿದೆ. ಪ್ರೀಮಿಯರ್ ಶೋ ಮೂಲಕ ಚಿತ್ರ 100 ಕೋಟಿ ರೂಪಾಯಿ […]Read More

Bollywood Cinibeat South Cinema

ಪುಷ್ಪ-2 ರಿಲೀಸ್‌ ಮಾಡದ ಥಿಯೇಟರ್‌ ಓನರ್‌ಗೆ ಕೊ*ಲೆ ಬೆದರಿಕೆ

ಗುರುವಾರ, ಡಿಸೆಂಬರ್ 5 ರಂದು ತೆಲಂಗಾಣದ ಥಿಯೇಟರ್‌ನಲ್ಲಿ ವ್ಯಕ್ತಿಯೊಬ್ಬ ಮತ್ತು ಅವನ ಸ್ನೇಹಿತರು, ಅಲ್ಲು ಅರ್ಜುನ್‌ ಅಭಿನಯದ ಪುಷ್ಪ-2 ಸಿನಿಮಾ ರಿಲೀಸ್‌ ಮಾಡದ ಥಿಯೇಟರ್‌ನೇ ಧ್ವಂಸಗೊಳಿಸಿದ ಆಘಾತಕಾರಿ ಘಟನೆ ನಡೆದಿದೆ. ವರದಿಯ ಪ್ರಕಾರ, ಟಿಕೆಟ್‌ ಮಾರಾಟವಾದ ನಂತ್ರ ತಾಂತ್ರಿಕ ದೋಷದಿಂದಾಗಿ ಅಲ್ಲು ಅರ್ಜುನ್ ಸ್ಟಾರ್ಟರ್, ಪುಷ್ಪ 2: ದಿ ರೂಲ್ ಅನ್ನು ಪ್ರದರ್ಶಿಸಲು ಮಂಚೇರಿಯಲ್ ಜಿಲ್ಲೆಯ ಚೆನ್ನೂರು ಪಟ್ಟಣದಲ್ಲಿರೋ ಶ್ರೀನಿವಾಸ್ ಥಿಯೇಟರ್‌ ವಿಫಲವಾದಾಗ, ಬಜ್ಜೂರಿ ವಿನಯ್ ಅನ್ನೋ ವ್ಯಕ್ತಿ ದಾಂಧಲೆ ನಡೆಸಿದ್ದಾನೆ. ಬಜ್ಜೂರಿ ವಿನಯ್ ಮತ್ತವನ ಸಂಗಡಿಗರು […]Read More

Cinibeat Kannada

ಗಂಡನ ಅಫೇರ್‌, ಟಾರ್ಚರ್‌..! ಬದಲಾದ ಕಲರ್ಸ್‌ ʻಭಾಗ್ಯʼ

ತನ್ನನ್ನು ತಾನು ಕಂಡುಕೊಂಡ ಭಾಗ್ಯಳ ದಿಟ್ಟ ಪಯಣದಿಂದ ಹುರುಪು ಪಡೆದು ಅವಳಂತೆ ಎಲ್ಲ ಎಲ್ಲೆಗಳನ್ನು ದಾಟಬಯಸುವ ಹೆಂಗಳೆಯರ ಕೆಚ್ಚು ಹಾಗೂ ಸ್ಥೈರ್ಯವನ್ನು ಸಂಭ್ರಮಿಸುವುದೇ “ನಾನು ಭಾಗ್ಯ” ಅಭಿಯಾನದ ಗುರಿ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರೂ, ತನಗೊದಗಿದ ಪರಿಸ್ಥಿತಿಯನ್ನು ಎದುರಿಸುತ್ತಾ ಕೆಚ್ಚು, ಮಹತ್ವಾಕಾಂಕ್ಷೆಗಳ ಹಾದಿ ತುಳಿದ ಭಾಗ್ಯಳ ಪಯಣ ವೀಕ್ಷಕರ ಮನಸನ್ನು ಇನ್ನಿಲ್ಲದಂತೆ ತಟ್ಟಿದೆ. ಎದುರಾದ ಸವಾಲುಗಳನ್ನೆಲ್ಲಾ ನಿಭಾಯಿಸುತ್ತಾ, ಎಲ್ಲ ನಿರೀಕ್ಷೆಗಳು ಹುಸಿಯಾಗುವಂತೆ ಬೆಳೆಯುತ್ತಿರುವ ಭಾಗ್ಯಳ ಕತೆ ನಾಡಿನ ಹೆಣ್ಣು ಮಕ್ಕಳಿಗೆ ಹೊಸ ಹುರುಪು ತುಂಬುತ್ತಿದೆ. ಕಲರ್ಸ್ […]Read More

Bollywood Cinibeat Sandalwood South Cinema

ಪುಷ್ಪ-2 ಪ್ರಮೋಷನ್‌ನಲ್ಲಿ ಹುಚ್ಚೆಬ್ಬಿಸಿದ ಶ್ರೀವಲ್ಲಿ ಲುಕ್ಸ್‌..!

ಪುಷ್ಪ-೨ ಸಿನಿಮಾದಲ್ಲಿ ಸೀದಾ ಸಾದಾ ಹಳ್ಳಿ ಹುಡುಗಿಯಾಗಿ, ಪುಷ್ಪನ ಹೆಂಡ್ತಿಯಾಗಿರೋ ರಶ್ಮಿಕಾ, ಪ್ರಚಾರದ ಟೈಮ್‌ನಲ್ಲಿ ಮಾತ್ರ ತನ್ನ ಸಪೂರ ಸೊಂಟದ ಮೈಮಾಟವನ್ನ ಪ್ರದರ್ಶನಕ್ಕಿಟ್ಟು, ಆಲ್‌ಮೋಸ್ಟ್‌ ಫೈರ್‌ ಹಚ್ಚಿದ್ಲು. ಶ್ರೀವಲ್ಲಿ ಅಲಿಯಾಸ್‌ ರಶ್ಮಿಕಾರ ಪ್ರಮೋಷನ್‌ ಗೆಟಪ್‌ಗಳ ಝಲಕ ಇಲ್ಲಿದೆ ನೋಡಿ..Read More

Cinibeat Kannada Sandalwood

ʻತಾಯವ್ವʼಳಿಗಾಗಿ ಒಂದಾದ ಬಿಜೆಪಿ, ಕಾಂಗ್ರೆಸ್‌..!

‘ತಾಯವ್ವ’ನಿಗೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್… ಕನ್ನಡ ಚಿತ್ರರಂಗದಲ್ಲೀಗ ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆಯೇ ಒಳ್ಳೊಳ್ಳೆ ಕಂಟೆಂಟ್ ಸಿನಿಮಾಗಳು ಪ್ರೇಕ್ಷಕರ ಗಮನಸೆಳೆಯುತ್ತವೆ. ಈ ಸಾಲಿಗೀಗ ಹೊಸ ಸೇರ್ಪಡೆ ತಾಯವ್ವ. ಸೂಲಗಿತ್ತಿ ಸುತ್ತ ಸಾಗುವ ಕಥೆಯಾಗಿರುವ ತಾಯವ್ವನಿಗೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್ ಕೊಟ್ಟಿದ್ದಾರೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ತಾಯವ್ವ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಆರ್.ಅಶೋಕ್ ಹಾಗೂ […]Read More

Cinibeat South Cinema

ʻಮಲ್ಲಿಕಾಪುರಂʼ ಸಿನಿಮಾ ನಿರ್ದೇಶಕರ ಹೊಸ ಸಿನಿಮಾ ʻಸುಮತಿ ವಳವುʼ

ಮಲಯಾಳಂನ ಸೂಪರ್‌ ಹಿಟ್ ಮಲ್ಲಿಕಾಪುರಂ ಚಿತ್ರ ನಿರ್ದೇಶಕರ ಹೊಸ ಸಿನಿಮಾ ಸುಮತಿ ವಳವು ವಾಟರ್ ಮ್ಯಾನ್ ಫಿಲಂಸ್, ಥಿಂಕ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣ ವಿಷ್ಣು ಶಶಿ ಶಂಕರ್ ನಿರ್ದೇಶನದ ಮಲಯಾಳಂ ಹಾರರ್-ಫ್ಯಾಂಟಸಿ ಸಿನಿಮಾ ಸುಮತಿ ವಲವು. ಅರ್ಜುನ್ ಅಶೋಕನ್ ಮತ್ತು ಮಾಳವಿಕಾ ಮನೋಜ್ ಮುಖ್ಯ ಪಾತ್ರಗಳಲ್ಲಿ ಈ ಸಿನಿಮಾದಲ್ಲಿದ್ದಾರೆ. ಅಭಿಲಾಷ್ ಪಿಳ್ಳೈ ಚಿತ್ರಕಥೆ ಬರೆದಿರುವ ಈ ಹಾರರ್‌ ಥ್ರಿಲ್ಲರ್‌ ಸಿನಿಮಾ ನವೆಂಬರ್‌ 30ರಿಂದ ಶೂಟಿಂಗ್‌ ಆರಂಭಿಸಿದೆ. ಈ ಹಿಂದೆ ಮಲಯಾಳಂನಲ್ಲಿ ಮಲ್ಲಿಕಾಪುರಂ ಸಿನಿಮಾ ನಿರ್ದೇಶನದ ಅನುಭವ ಹೊಂದಿರುವ […]Read More

Cinibeat Kannada Sandalwood

ಹೋಲ್‌ ಸೇಲಾಗಿ ಕಾಡು ಸೇರಿದ ಕನ್ನಡದ ಸ್ಟಾರ್ಸ್‌..!

2025ರ ಜನವರಿ 24ರಂದು ಮಲ್ಟಿಸ್ಟಾರರ್ ಚಿತ್ರ “ಫಾರೆಸ್ಟ್” ಬಿಡುಗಡೆ . ಪೋಸ್ಟರ್ ‌ಬಿಡುಗಡೆ ಮಾಡಿ‌ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರತಂಡ ಆರಂಭ‌ದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ, ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್”. ಶೀರ್ಷಿಕೆ, ತಾರಾಗಣ, ಕನ್ಸೆಪ್ಟ್, ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ಬಹು ನಿರೀಕ್ಷಿತ “ಫಾರೆಸ್ಟ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2025 ರ ಜನವರಿ 24 ರಂದು ಈ ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ […]Read More

Bollywood Cinibeat South Cinema

ಪುಷ್ಪ-2 ಜಾತ್ರೆ ಸೀನ್‌ಗೆ ಕತ್ತರಿ, ವಿಜಯ್‌ ದೇವರಕೊಂಡ ವಿಲನ್‌

ಪುಷ್ಪಾ 2 ಕುರಿತು ಆಘಾತಕಾರಿ ಅಪ್‌ಡೇಟ್‌ ಸಿಕ್ಕಿದೆ. ಹಲವಾರು ಮನರಂಜನಾ ಸುದ್ದಿ ಪೋರ್ಟಲ್‌ಗಳು ವರದಿ ಮಾಡಿದಂತೆ, ಸೌದಿ ಅರೇಬಿಯಾದಲ್ಲಿ ಚಲನಚಿತ್ರದ ಪ್ರಮುಖ ಸರಣಿಯನ್ನು ತೆಗೆದುಹಾಕಲಾಗಿದೆ. 60 ಕೋಟಿ ವೆಚ್ಚದಲ್ಲಿ ಚಿತ್ರೀಕರಿಸಲಾದ ಗಂಗಮ್ಮ ದೇವಿ ಜಾತ್ರೆ ದೃಶ್ಯವನ್ನು ಚಿತ್ರದಿಂದ ಕಡಿತಗೊಳಿಸಲಾಗಿದೆ. ಹೀಗಾಗಿ ಅಲ್ಲು ಅರ್ಜುನ್ ಸಿನಿಮಾದ ರನ್ ಟೈಮ್ 19 ನಿಮಿಷ ಕಡಿಮೆಯಾಗಿದೆ. ಸೌದಿ ಅರೇಬಿಯಾ ಸೆನ್ಸಾರ್ ಮಂಡಳಿಯು ಜಾತ್ರೆ ಸೀನ್‌ಅನ್ನು ಟ್ರಿಮ್ ಮಾಡುವಂತೆ ಸೂಚನೆ ನೀಡಿದೆ. ಹಾಗಾಗಿ ಸಿನಿಮಾ ಸೌದಿಯಲ್ಲಿ ಜಸ್ಟ್‌ 3 ಗಂಟೆ, 1 ನಿಮಿಷದ […]Read More

Cinibeat Kannada Sandalwood

ಫೈನಲಿ ತೆರೆಗೆ ಬರ್ತಿದೆ ʻಭೀಮೂಸ್‌ ಬ್ಯಾಂಗ್‌ ಬ್ಯಾಂಗ್‌ ಕಿಡ್ಸ್‌ʼ

ತೆರೆಗೆ ಬರಲು ಅಣಿಯಾಗಿದೆ ಎಸ್ ವಿ ರಾಜೇಂದ್ರಸಿಂಗ್ ಬಾಬು ನಿರ್ದೇಶನದ “ರಕ್ತ ಕಾಶ್ಮೀರ” . ಬಹು ನಿರೀಕ್ಷಿತ ಈ ಚಿತ್ರದ ಪ್ರಮುಖಪಾತ್ರದಲ್ಲಿ ಉಪೇಂದ್ರ ಹಾಗೂ ರಮ್ಯ ನಟನೆ MDM ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಮ್ಯ ಮುಖ್ಯಪಾತ್ರದಲ್ಲಿ ನಟಿಸಿರುವ “ರಕ್ತ ಕಾಶ್ಮೀರ” ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು […]Read More